ನಮೋಶಂಕರ ಲೇಔಟ್ನಲ್ಲಿ ಗಾಂಜಾ ಮಾರಾಟ ದಂಧೆ ಪತ್ತೆ 04 ಕೆಜಿ ಗಾಂಜಾ ವಶ, ಒಬ್ಬ ಆರೋಪಿಯ ಬಂಧನ
ಶಿವಮೊಗ್ಗ, ಡಿಸೆಂಬರ್ 12 (ಎಫ್7ನ್ಯೂಸ್):
ಶಿವಮೊಗ್ಗ ನಗರದ ತೀರ್ಥಹಳ್ಳಿ ರಸ್ತೆಯಲ್ಲಿರುವ ನಮೋಶಂಕರ ಲೇಔಟ್ ಒಳಗೆ ಮಾರುತಿ ಸ್ವಿಫ್ಟ್ ಸಿಲ್ವರ್ ಬಣ್ಣದ ಕಾರಿನಲ್ಲಿ ಗಾಂಜಾ ಇಟ್ಟುಕೊಂಡು ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪೊಲೀಸರು ದಾಳಿ ನಡೆಸಿ ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ.
ಇಲಾಖೆಯ ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ ರವಿ ಪಾಟೀಲ್ ಅವರ ನೇತೃತ್ವದಲ್ಲಿ ಪೊಲೀಸ್ ಸಬ್ಇನ್ಸ್ಪೆಕ್ಟರ್ ನಾರಾಯಣ ಮಧುಗಿರಿ ಹಾಗೂ ಸಿಬ್ಬಂದಿಗಳಾದ ಎಎಸ್ಐ ಚೂಡಾಮಣಿ ಕೆ., ಸಿಹೆಚ್ಸಿ ಗೋವರ್ದನ, ಸಿಹೆಚ್ಸಿ ಸಂದೀಪ ಎಸ್.ಡಿ., ಸಿಪಿಸಿ ಗುರುನಾಯ್ಕ, ಚಂದ್ರನಾಯ್ಕ, ಗಣೇಶ, ಪ್ರಶಾಂತ್ ಶೆಟ್ಟಣ್ಣನವರ್ ಅವರೊಂದಿಗೆ ಸ್ಥಳಕ್ಕೆ ತೆರಳಿ ದಾಳಿ ನಡೆಸಲಾಗಿದೆ.
ದಾಳಿಯ ವೇಳೆ ಇಲಾಖೆಯ ಮೇಲಾಧಿಕಾರಿಗಳಾದ ಶ್ರೀ ಬಾಬು ಅಂಜನಪ್ಪ, ಡಿವೈಎಸ್ಪಿ, ಶಿವಮೊಗ್ಗ ನಗರ ಎ–ಉಪವಿಭಾಗ ಹಾಗೂ SOCO ಅಧಿಕಾರಿಗಳ ಸಮ್ಮುಖದಲ್ಲಿ ಆರೋಪಿತನಾದ ಮೊಹಮ್ಮದ್ ಅಲ್ತಾಪ್ (ವಾಸ: ಇಬ್ರಾಹಿಂ ಮಸೀದಿ ಹತ್ತಿರ, ಅಣಲೆಕೊಪ್ಪ, ಶಿರುವಾಳ ರಸ್ತೆ, ಸಾಗರ ಟೌನ್) ಎಂಬುವನನ್ನು ಬಂಧಿಸಲಾಗಿದೆ.
ಆರೋಪಿಯ ವಶದಲ್ಲಿದ್ದ ಮಾರುತಿ ಸ್ವಿಫ್ಟ್ ಸಿಲ್ವರ್ ಕಾರಿನಲ್ಲಿ 04 ಕೆಜಿ 130 ಗ್ರಾಂ ತೂಕದ, ಸುಮಾರು ರೂ. 2,00,000/- ಮೌಲ್ಯದ ಗಾಂಜಾ ಸೊಪ್ಪನ್ನು ವಶಪಡಿಸಿಕೊಳ್ಳಲಾಗಿದೆ.
ಈ ಸಂಬಂಧ ಆರೋಪಿತನ ವಿರುದ್ಧ NDPS ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.
