ಅಝಾನ್ ವೇಳೆ ಡಿಸಿಬಲ್ ಮಿತಿ ಮೀರುವ ಲೌಡ್‌ಸ್ಪೀಕರ್ ಬಳಕೆಯಿಂದ ಶಬ್ದ ಮಾಲಿನ್ಯ: ಡಿ.ಎಸ್. ಅರುಣ್ ತೀವ್ರ ಖಂಡನೆ

ಅಝಾನ್ ವೇಳೆ ಡಿಸಿಬಲ್ ಮಿತಿ ಮೀರುವ ಲೌಡ್‌ಸ್ಪೀಕರ್ ಬಳಕೆಯಿಂದ ಶಬ್ದ ಮಾಲಿನ್ಯ: ಡಿ.ಎಸ್. ಅರುಣ್ ತೀವ್ರ ಖಂಡನೆ

ಬೆಳಗಾವಿ: ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಪರಿಷತ್ ಅಧಿವೇಶನದಲ್ಲಿ ಮಾನ್ಯ ವಿಧಾನಪರಿಷತ್ ಶಾಸಕರೂ ಹಾಗೂ ರಾಜ್ಯ ಬಿಜೆಪಿ ಕಾರ್ಯದರ್ಶಿಗಳಾದ ಡಿ.ಎಸ್. ಅರುಣ್ ಅವರು, ಶಿವಮೊಗ್ಗ ಸೇರಿದಂತೆ ರಾಜ್ಯದ ಹಲವೆಡೆ ಅಝಾನ್ ವೇಳೆ ನಿಗದಿತ ಡಿಸಿಬಲ್ ಮಿತಿಯನ್ನು ಮೀರಿ ಲೌಡ್‌ಸ್ಪೀಕರ್ ಬಳಸುವುದರಿಂದ ಉಂಟಾಗುತ್ತಿರುವ ಶಬ್ದ ಮಾಲಿನ್ಯವನ್ನು ತೀವ್ರವಾಗಿ ಖಂಡಿಸಿದರು.


ಗಣೇಶೋತ್ಸವದ ಸಂದರ್ಭದಲ್ಲಿ ಡಿಜೆ ಬಳಕೆಯನ್ನು ನಿಷೇಧಿಸುವ ಸರ್ಕಾರ, ದಿನನಿತ್ಯ ನಡೆಯುವ ಅಝಾನ್‌ಗೆ ಶಬ್ದ ನಿಯಂತ್ರಣ ಜಾರಿಗೊಳಿಸದೇ ಇರುವುದನ್ನು ಅವರು ದ್ವಂದ್ವ ನೀತಿ ಎಂದು ಪ್ರಶ್ನಿಸಿದರು. ಸುಪ್ರೀಂ ಕೋರ್ಟ್ ಆದೇಶ ಹಾಗೂ Noise Pollution Rules ಎಲ್ಲ ಧರ್ಮಗಳಿಗೂ ಸಮಾನವಾಗಿ ಅನ್ವಯಿಸಬೇಕು. ಕಾನೂನು ಎಲ್ಲರಿಗೂ ಒಂದೇ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕೆಂದು ಡಿ.ಎಸ್. ಅರುಣ್ ಆಗ್ರಹಿಸಿದರು.

ಅತಿಯಾದ ಶಬ್ದದಿಂದ ಮಕ್ಕಳು, ರೋಗಿಗಳು ಹಾಗೂ ಹಿರಿಯ ನಾಗರಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಗಮನ ಸೆಳೆದ ಅವರು, ಪೊಲೀಸ್ ಇಲಾಖೆ, ಜಿಲ್ಲಾಡಳಿತ ಹಾಗೂ ಪರಿಸರ ಇಲಾಖೆ ಸ್ವಯಂಪ್ರೇರಿತವಾಗಿ ಪರಸ್ಪರ ಸಮನ್ವಯ ಸಾಧಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಮಾನ್ಯ ಪರಿಸರ ಸಚಿವರನ್ನು ಒತ್ತಾಯಿಸಿದರು.




Post a Comment

Previous Post Next Post