ಧರ್ಮಸ್ಥಳ ಹತ್ಯಾಕಾಂಡ: ಧರ್ಮದ ಹೆಸರಿನಲ್ಲಿ ನ್ಯಾಯ ಹೋರಾಟ ಹತ್ತಿಕ್ಕಬೇಡಿ – ವಕೀಲ ಕೆ.ಪಿ. ಶ್ರೀಪಾಲ್ ಆಗ್ರಹ

ಧರ್ಮಸ್ಥಳ ಹತ್ಯಾಕಾಂಡ: ಧರ್ಮದ ಹೆಸರಿನಲ್ಲಿ ನ್ಯಾಯ ಹೋರಾಟ ಹತ್ತಿಕ್ಕಬೇಡಿ – ವಕೀಲ ಕೆ.ಪಿ. ಶ್ರೀಪಾಲ್ ಆಗ್ರಹ



ಶಿವಮೊಗ್ಗ: ಧರ್ಮಸ್ಥಳದ ಹತ್ತಿರದ ಗ್ರಾಮದಲ್ಲಿ ನಡೆದಿದೆ ಎನ್ನಲಾಗುವ ಹಲವು ಹತ್ಯಾಕೃತ್ಯಗಳಿಗೆ ಸಂಬಂಧಿಸಿದಂತೆ ಈಗಾಗಲೇ ಸಾಮಾಜಿಕವಾಗಿ ಹಾಗೂ ರಾಜಕೀಯವಾಗಿ ಪ್ರಚಲಿತವಾಗಿರುವ ಚರ್ಚೆಗೆ ಹೊಸ ಆಯಾಮ ನೀಡುತ್ತಾ, ಶಿವಮೊಗ್ಗದ ಹಿರಿಯ ನ್ಯಾಯವಾಣಿ ವಕೀಲರಾದ ಕೆ.ಪಿ. ಶ್ರೀಪಾಲ್ ರವರು EF7 ಡಿಜಿಟಲ್ ನ್ಯೂಸ್‌ಗೆ ತಮ್ಮ ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ.

ವಿಡಿಯೋ ಇಲ್ಲಿದೆ ನೋಡಿ


ಅವರು ಹೇಳಿದ್ದಾರೆ: “ಧರ್ಮಸ್ಥಳವು ಪುಣ್ಯಕ್ಷೇತ್ರವಾಗಿದ್ದು, ಇಂಥ ಪವಿತ್ರ ಸ್ಥಳದಲ್ಲಿ ಇತ್ತೀಚೆಗೆ ಕೇಳಿಬರುತ್ತಿರುವ ಸರಣಿ ಹತ್ಯೆ ಆರೋಪಗಳು ಭಾರೀ ಆಘಾತವನ್ನುಂಟುಮಾಡಿವೆ. ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಸರ್ಕಾರ ಎಸ್.ಐ.ಟಿ. ತನಿಖಾ ತಂಡವನ್ನು ರಚಿಸಿರುವುದು ಸ್ವಾಗತಾರ್ಹವಾದ ಹೆಜ್ಜೆ. ಆದರೆ ಪೀಡಿತ ಕುಟುಂಬಗಳು ನ್ಯಾಯಕ್ಕಾಗಿ ನಡೆಸುತ್ತಿರುವ ಹೋರಾಟವನ್ನು ಧರ್ಮದ ಹೆಸರಿನಲ್ಲಿ ಅಥವಾ ಭಕ್ತಿಯ ನೆಪದಲ್ಲಿ ತಡೆಯಲು ಯತ್ನಿಸಬಾರದು” ಎಂದು ಸ್ಪಷ್ಟವಾಗಿ ಹೇಳಿದ್ದಾರೆ.


ಪರೀಕ್ಷೆಯಲ್ಲಿರುವ ಪವಿತ್ರತೆ: ಧರ್ಮಸ್ಥಳದಲ್ಲಿ ಹಿಂದಿನ ಆರೋಪಿ ಪ್ರಕರಣಗಳ ಪ್ರಸ್ತಾಪ

1983 ರಲ್ಲಿಯೇ ಈ ಭಾಗದಲ್ಲಿ ಹತ್ಯಾ ಪ್ರಕರಣಗಳ ಕುರಿತು ಚರ್ಚೆಯಾಗಿದ್ದು, ಆಗಿನ ವಿರೋಧಪಕ್ಷದ ನಾಯಕ ಬಂಗಾರಪ್ಪ ಅವರು ಈ ಬಗ್ಗೆ ಅತ್ತ ಜನರ ಗಮನ ಸೆಳೆದಿದ್ದರು ಎಂಬುದನ್ನು ಶ್ರೀಪಾಲ್ ರವರು ನೆನಪಿಸಿದ್ದಾರೆ.

2012ರ ಸೌಜನ್ಯ ಪ್ರಕರಣದ ಬಗ್ಗೆ ಪ್ರಸ್ತಾಪಿಸಿ ಅವರು ಹೇಳಿದರು: “ಆ ಪ್ರಕರಣದ ಪೀಡಿತರು ಇಂದಿಗೂ ನ್ಯಾಯಕ್ಕಾಗಿ ಕಾದು ಕೊಂಡಿದ್ದಾರೆ ಎಂಬುದು ವಿಷಾದನೀಯ. ಈಗ ಮತ್ತೊಬ್ಬ ವ್ಯಕ್ತಿ, ತಾನೇ ಇತ್ತೀಚಿನ ಹತ್ಯೆಯ ಜೀವಂತ ಸಾಕ್ಷಿ ಎಂದು ಹೇಳಿಕೊಂಡು ಬಂದಿರುವು, ಹೊಸ ಬೆಳಕಿಗೆ ದಾರಿ ಮಾಡಿಕೊಡಬಹುದು. ಆ ವ್ಯಕ್ತಿಗೆ ಸೂಕ್ತ ರಕ್ಷಣೆ ದೊರೆಯಬೇಕು” ಎಂಬುದು ಅವರ ಒತ್ತಾಯ.


ಪಂಚಾಯಿತಿ vs ಸಾಕ್ಷಿಗಳ ಹೇಳಿಕೆ: 98 ಶವಗಳ ವಿವಾದ

ಧರ್ಮಸ್ಥಳ ಪಂಚಾಯಿತಿಯು ನೀಡಿರುವ – 98 ಅನಾಮದೇಯ ಶವಗಳು ಸಮಾಧಿಗೊಳಿಸಲಾಗಿದೆ ಎಂಬ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ ಶ್ರೀಪಾಲ್ ರವರು, ಅನಾಮದೇಯ ವ್ಯಕ್ತಿಯ ಹೇಳಿಕೆ ಮತ್ತು ಪಂಚಾಯಿತಿ ದಾಖಲೆಗಳ ನಡುವೆ ಸ್ಪಷ್ಟ ವ್ಯತ್ಯಾಸವಿದೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.


ಅಂತಿಮವಾಗಿ…

“ಈ ಪ್ರಕರಣದಲ್ಲಿ ಆರೋಪಿಗಳು ಎಷ್ಟೇ ಪ್ರಭಾವಿಗಳಾಗಿದ್ದರೂ, ಅವರಿಗೆ ಕಾನೂನಿನ ಪ್ರಕಾರ ಶಿಕ್ಷೆ ಆಗಲೇ ಬೇಕು. ಧರ್ಮದ ಹೆಸರಿನಲ್ಲಿ ತಪಾಸಣೆ ಅಥವಾ ನ್ಯಾಯೋಚಿತ ಚಳವಳಿಗಳನ್ನು ಹತ್ತಿಕ್ಕಬಾರದು. ಇದು ತೀವ್ರ ಅನ್ಯಾಯಕ್ಕೆ ದಾರಿ ಮಾಡಿಕೊಡಬಹುದು” ಎಂದು ವಕೀಲ ಶ್ರೀಪಾಲ್ EF7 ನ್ಯೂಸ್‌ಗೆ ತಿಳಿಸಿದ್ದಾರೆ.


ವರದಿ: ಡಿ.ಪಿ. ಅರವಿಂದ್, 

F7 ನ್ಯೂಸ್‌ – ಶಿವಮೊಗ್ಗ



Post a Comment

Previous Post Next Post