ಮೇ 22 ರಂದು ಶಿವಮೊಗ್ಗದ ಹಲವೆಡೆ ವಿದ್ಯುತ್ ವ್ಯತ್ಯಯ: ಶಕ್ತಿ ಪರಿವರ್ತಕ ದುರಸ್ತಿ ಕಾಮಗಾರಿಗೆ ತುರ್ತು ನಿರ್ವಹಣೆ
ವಿವರಗಳು:
ಶಿವಮೊಗ್ಗ, ಮೇ 20 (ಕರ್ನಾಟಕ ವಾರ್ತೆ): ಮೇ 22 ರಂದು ಬೆಳಿಗ್ಗೆ 9:00 ಗಂಟೆಯಿಂದ ಸಂಜೆ 6:00 ಗಂಟೆಯವರೆಗೆ ಶಿವಮೊಗ್ಗದ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಸಂಭವಿಸಲಿದೆ. ಆಲ್ಕೋಳ ವಿದ್ಯುತ್ ವಿತರಣಾ ಕೇಂದ್ರದಿಂದ ಶಕ್ತಿ ಪರಿವರ್ತಕ-2ರಲ್ಲಿ ಕರ್ನಾಟಕ ವಿದ್ಯುತ್ ಸಂಚಲಿತ ನಿಗಮ (ಕೆ.ಪಿ.ಟಿ.ಸಿ.ಎಲ್) ವತಿಯಿಂದ ತುರ್ತು ನಿರ್ವಹಣಾ ಕಾರ್ಯ ನಡೆಯಲಿದೆ.
ಈ ನಿರ್ವಹಣಾ ಕಾರ್ಯದ ಭಾಗವಾಗಿ ಎ.ಎಫ್-5, 6, 7 ಮತ್ತು 8 ಫೀಡರ್ಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ. ಪರಿಣಾಮವಾಗಿ ಈ ಕೆಳಗಿನ ಪ್ರದೇಶಗಳಿಗೆ ವಿದ್ಯುತ್ ವ್ಯತ್ಯಯವಾಗಲಿದೆ:
-
ಸಾಗರ ರಸ್ತೆ
-
ಎ.ಪಿ.ಎಂ.ಸಿ ಮಾರುಕಟ್ಟೆ
-
ಇಂಡಸ್ಟ್ರೀಯಲ್ ಏರಿಯಾ
-
ಗೋಪಾಳ ಎ, ಬಿ, ಸಿ, ಡಿ, ಇ, ಎಫ್ ಬಡಾವಣೆ
-
ಪ್ರೆಸ್ ಕಾಲೋನಿ
-
ರಂಗನಾಥ ಬಡಾವಣೆ
-
ಅಲ್ಹರೀಮ್ ಲೇಔಟ್
-
ಮಹೇಶ್ ಪಿ.ಯು ಕಾಲೇಜು
-
ಅಂಧರ ವಿಕಾಸ ಶಾಲೆ
-
ವಿನಾಯಕ ವೃತ್ತ
-
ಸವಿ ಬೇಕರಿ ಕೆಳಭಾಗದ ರಸ್ತೆ
-
ವೆಟರಿನರಿ ಕಾಲೇಜು ಮುಖ್ಯ ರಸ್ತೆ
-
ಇಂದಿರಾ ಗಾಂಧಿ ಬಡಾವಣೆ
-
ಜಯದೇವ ಬಡಾವಣೆ
-
ಶಿವಪ್ಪ ನಾಯಕ ಬಡಾವಣೆ
-
ಪ್ರಿಯದರ್ಶಿನಿ ಲೇಔಟ್
-
ಕೆ.ಎಸ್.ಆರ್.ಟಿ.ಸಿ ಲೇಔಟ್
-
ಕೆ.ಹೆಚ್.ಬಿ ಎ, ಬಿ, ಸಿ, ಡಿ, ಇ, ಎಫ್, ಜಿ ಬ್ಲಾಕ್
-
ಕಾಶೀಪುರ
-
ಲಕ್ಕಪ್ಪ ಲೇಔಟ್
-
ರೇಣುಕಾಂಬ ಬಡಾವಣೆ
-
ಕರಿಯಣ್ಣ ಬಿಲ್ಡಿಂಗ್
-
ಕೆಂಚಪ್ಪ ಲೇಔಟ್
-
ಕಲ್ಲಹಳ್ಳಿ
-
ಕುವೆಂಪು ಬಡಾವಣೆ
-
ತಿಮ್ಮಕ್ಕ ಲೇಔಟ್
-
ಹುಡ್ಕೋ ಕಾಲೋನಿ
-
ಲಕ್ಷ್ಮೀಪುರ ಬಡಾವಣೆ
-
ದಾಮೋದರ ಕಾಲೋನಿ ಮತ್ತು ಸುತ್ತಮುತ್ತಲಿನ ಪ್ರದೇಶಗಳು
ಮೆಸ್ಕಾಂ ಪ್ರಕಟಣೆಯಲ್ಲಿ ಸಾರ್ವಜನಿಕರು ಈ ತಾತ್ಕಾಲಿಕ ಅಸೌಕರ್ಯವನ್ನು ಮನಗಂಡು ಸಹಕರಿಸಬೇಕೆಂದು ಮನವಿ ಮಾಡಲಾಗಿದೆ.
ವರದಿ:ಡಿ.ಪಿ ಅರವಿಂದ್ ಎಫ್7ನ್ಯೂಸ್ ಶಿವಮೊಗ್ಗ


