ರಾಷ್ಟ್ರಮಟ್ಟದ ಪದಕ ವಿಜೇತೆ ಪ್ರಣತಿ ಜಿ ಸಚಿವ ಮಧು ಬಂಗಾರಪ್ಪ ಅವರನ್ನು ಭೇಟಿ

ರಾಷ್ಟ್ರಮಟ್ಟದ ಪದಕ ವಿಜೇತೆ ಪ್ರಣತಿ ಜಿ ಸಚಿವ ಮಧು ಬಂಗಾರಪ್ಪ ಅವರನ್ನು ಭೇಟಿ



ಶಿವಮೊಗ್ಗ, ಮಾ. 05: 
ಮಾರ್ಷಲ್ ಆರ್ಟ್ಸ್‌ನಲ್ಲಿ ರಾಷ್ಟ್ರಮಟ್ಟದ ಅತಿ ಕಿರಿಯ ವಯಸ್ಸಿನ ಪದಕ ವಿಜೇತೆ ಹೆಗ್ಗಳಿಕೆಗೆ ಪಾತ್ರರಾದ ಕುಮಾರಿ ಪ್ರಣತಿ ಜಿ ಅವರು ಇಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವರಾದ ಎಸ್. ಮಧು ಬಂಗಾರಪ್ಪ ಅವರನ್ನು ಭೇಟಿಯಾಗಿ ತಮ್ಮ ಸಾಧನೆಗೆ ಮಂತ್ರಿಯವರಿಂದ ಶುಭಾಶಯ ಸ್ವೀಕರಿಸಿದರು.

ಪ್ರಣತಿ ಜಿ ಅವರು ರಷ್ಯಾ ದೇಶದ ಮಾಸ್ಕೋದಲ್ಲಿ ನಡೆಯಲಿರುವ (International Wushu Star Championship - 2025) ಇಂಟರ್ನ್ಯಾಷನಲ್ ವುಶು ಸ್ಟಾರ್ ಚಾಂಪಿಯನ್ ಶಿಪ್-2025 ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ಸಚಿವರು ಪ್ರಣತಿಗೆ ಶುಭ ಹಾರೈಸಿ, ಅಂತರಾಷ್ಟ್ರೀಯ ಮಟ್ಟದಲ್ಲಿ ರಾಜ್ಯ ಮತ್ತು ದೇಶಕ್ಕೆ ಕೀರ್ತಿ ತರುವಂತೆ ಆಶಿಸಿದರು.

ಆರ್ಥಿಕ ನೆರವು ನೀಡಿದ ಉದ್ಯಮಿ ಪ್ರತಾಪ್ ಕುಮಾರ್ ಆರ್:
ಇದೇ ವೇಳೆ ಆತ್ಮೀಯ ಯುವ ಮುಖಂಡರು ಹಾಗೂ ಉದ್ಯಮಿಯಾದ ಶ್ರೀ ಪ್ರತಾಪ್ ಕುಮಾರ್ ಆರ್ ಅವರು ಸಚಿವರ ಮುಖಾಂತರ ಒಂದು ಲಕ್ಷ ರೂಪಾಯಿಗಳ ಚೆಕ್ ಅನ್ನು ಪ್ರಣತಿಯ ಮುಂದಿನ ಕ್ರೀಡಾ ಸಾಧನೆಗಾಗಿ ನೀಡಿ ಆರ್ಥಿಕ ನೆರವು ಒದಗಿಸಿದರು. ಈ ವೇಳೆ ಸಚಿವರು ಉದ್ಯಮಿ ಪ್ರತಾಪ್ ಕುಮಾರ್ ಆರ್ ಅವರನ್ನು ಅಭಿನಂದಿಸಿ, ಇತರ ಉದ್ಯಮಿಗಳು ಮತ್ತು ಸಾಂಸ್ಕೃತಿಕ ಕ್ಷೇತ್ರದ ಹಿತೈಷಿಗಳು ಇಂತಹ ಪ್ರತಿಭಾನ್ವಿತ ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಬೇಕೆಂದು ಕರೆ ನೀಡಿದರು.

ಸರಕಾರದಿಂದ ಹೆಚ್ಚಿನ ಸಹಾಯ ಭರವಸೆ:
ಸಚಿವ ಮಧು ಬಂಗಾರಪ್ಪ ಅವರು ಮಾತನಾಡಿ, "ಮುಂದಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯವನ್ನು ಪ್ರತಿನಿಧಿಸುವ ಕ್ರೀಡಾಪಟುಗಳಿಗೆ ಹಾಗೂ ಕ್ರೀಡೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಇನ್ನಷ್ಟು ಪ್ರೋತ್ಸಾಹ ನೀಡಲು ಪೂರಕ ವ್ಯವಸ್ಥೆ ಕಲ್ಪಿಸಲಾಗುವುದು" ಎಂದು ಭರವಸೆ ನೀಡಿದರು.

ಉಪಸ್ಥಿತ ವ್ಯಕ್ತಿಗಳು:
ಕಾರ್ಯಕ್ರಮದಲ್ಲಿ ರಾಜ್ಯ ಕಾಂಗ್ರೆಸ್ ಮುಖಂಡರಾದ ಬಿ.ಹೆಚ್. ಚಂದ್ರಶೇಖರ್, ಯುವ ಮುಖಂಡರು ಮತ್ತು ಗಣ್ಯರು ಉಪಸ್ಥಿತರಿದ್ದರು.

ವರದಿ: ಡಿ.ಪಿ.ಅರವಿಂದ್

Post a Comment

Previous Post Next Post