ಶ್ರೀ ರಾಮಸೇವಾ ಭಾವಸಾರ ಕ್ಷತ್ರಿಯ ಕ್ರೆಡಿಟ್‌ ಕೋ ಅಪರೇಟಿವ್‌ ಸೋಸೈಟಿ ಲಿ. ನೂತನ ಕೇಂದ್ರ ಕಚೇರಿ ಶುಭಾರಂಭ ಕಾರ್ಯಕ್ರಮ

ಶ್ರೀ ರಾಮಸೇವಾ ಭಾವಸಾರ ಕ್ಷತ್ರಿಯ ಕ್ರೆಡಿಟ್‌ ಕೋ ಆಪರೇಟಿವ್‌ ಸೋಸೈಟಿ ಲಿ.

ನೂತನ ಕೇಂದ್ರ ಕಛೇರಿ ಶುಭಾರಂಭ ಕಾರ್ಯಕ್ರಮ



ಭಾವಸಾರ ಸಮಾಜದ ಬಹುದಿನಗಳ ಕನಸಾಗಿರುವ ನೂತನ ಕೇಂದ್ರ ಕಛೇರಿಯನ್ನು ಶುಭಾರಂಭ ಮಾಡುವ ಸಮಯ ಈಗ ಒದಗಿ ಬಂದಿದೆ. ಈ ಮಹತ್ವದ ಉದ್ಘಾಟನಾ ಕಾರ್ಯಕ್ರಮವು 31/01/2025, ಶುಕ್ರವಾರ, ಬೆಳಗ್ಗೆ 11.00 ಗಂಟೆಗೆ ಲೋಕಾರ್ಪಣೆಯಾಗಲಿದ್ದು, ಈ ಸಮಾರಂಭವು ಭಾವಸಾರ ಸಮಾಜದ ಪ್ರಗತಿಗೆ ಮತ್ತೊಂದು ಮೇಳವಾಗಿ ಕಾಣಲಿದೆ.

ಈ ಉದ್ಘಾಟನಾ ಸಮಾರಂಭದ ಜವಾಬ್ದಾರಿಯನ್ನು ಸಂತೋಷ್ ಸಾಕ್ರೆ, ಶ್ರೀ ರಾಮಸೇವಾ ಭಾವಸಾರ ಕ್ಷತ್ರಿಯ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ. ಅಧ್ಯಕ್ಷರು, ಮತ್ತು ಗಜೇಂದ್ರನಾಥ್ ಟಿ.ವಿ, ಭಾವಸಾರ ಕ್ಷತ್ರಿಯ ಮಹಾಜನ ಸಮಾಜ ಅಧ್ಯಕ್ಷರು ನಿರ್ವಹಿಸಲಿದ್ದಾರೆ.

ಮುಖ್ಯ ಅತಿಥಿಗಳು:

  • ಮಧು ಬಂಗಾರಪ್ಪ – ಜಿಲ್ಲಾ ಉಸ್ತುವಾರಿ ಸಚಿವ

  • ಬಿ.ವೈ. ರಾಘವೇಂದ್ರ – ಶಿವಮೊಗ್ಗ ಸಂಸದ

  • ಎಸ್.ಎನ್. ಚನ್ನ ಬಸಪ್ಪ – ಶಾಸಕರು

  • ಶಾರಧಾ ಪೂರ್ಯನಾಯ್ಕ್ – ಗ್ರಾಮಾಂತರ ಶಾಸಕಿ

  • ಡಿ.ಎಸ್. ಅರುಣ್ ಕುಮಾರ್ – ಪರಿಷತ್ ಸದಸ್ಯ

  • ಕೆ.ಎಸ್. ಈಶ್ವರಪ್ಪ – ಮಾಜಿ ಉಪಮುಖ್ಯಮಂತ್ರಿ

ಆಡಳಿತ ಮಂಡಳಿಯ ಹೊಸ ಸಾಧನೆಗಳು:

ಹೊಸದಾಗಿ ಆಯ್ಕೆಯಾದ ಆಡಳಿತ ಮಂಡಳಿಯು ತಮ್ಮ ಕಾರ್ಯತತ್ಪರತೆಯಿಂದ ಹಲವು ಮಹತ್ವದ ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತಂದಿದೆ:

  1. ಸಿ.ಬಿ.ಎಸ್ (ಕೋರ್ ಬ್ಯಾಂಕಿಂಗ್ ಸಿಸ್ಟಮ್) ಅನ್ನು ಕೇಂದ್ರ ಹಾಗೂ ಶಾಲಾ ಕಛೇರಿಗೆ ಅಳವಡಿಸಲಾಗಿದೆ.

  2. ಡಿವಿಡೆಂಟ್ ಹಣವನ್ನು ನೇರವಾಗಿ ಸದಸ್ಯರ ಉಳಿತಾಯ ಖಾತೆಗೆ ಜಮಾ ಮಾಡುವ ವ್ಯವಸ್ಥೆ ಮಾಡಲಾಗಿದೆ.

  3. ಸದಸ್ಯರ ಕ್ಷೇಮಾಭಿವೃದ್ಧಿ ನಿಧಿಯನ್ನು ₹12,000/-ಕ್ಕೆ ಹೆಚ್ಚಿಸಲಾಗಿದೆ.

  4. ಸಂಘದ ವ್ಯವಹಾರಗಳನ್ನು QR ಕೋಡ್ ಮೂಲಕ ಆನ್‌ಲೈನ್ ಪಾವತಿ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ.

  5. ಠೇವಣಿಗಳ ಬಡ್ಡಿದರವನ್ನು 7.5% ಹಾಗೂ ಹಿರಿಯ ನಾಗರಿಕರಿಗೆ 8% ಗೆ ಹೆಚ್ಚಿಸಲಾಗಿದೆ.

  6. ಮಹಿಳಾ ಷೇರುದಾರರಿಗೆ ಠೇವಣಿಗಳ ಮೇಲೆ 8% ಬಡ್ಡಿ ನೀಡುವ ಕ್ರಮ ಜಾರಿಗೆ ತಂದಿದೆ.

ಒಟ್ಟಾರೆಯಾಗಿ, ನೂತನ ಆಡಳಿತ ಮಂಡಳಿಯು ಹೊಸ ಯೋಜನೆಗಳ ಮೂಲಕ ಸಂಘದ ಸದಸ್ಯರಲ್ಲಿ ವಿಶ್ವಾಸವನ್ನು ಮೂಡಿಸಿದೆ. ಈ ನೂತನ ಕಛೇರಿ ನಿರ್ಮಾಣ ಹಾಗೂ ಉದ್ಘಾಟನೆ ಭಾವಸಾರ ಸಮಾಜದ ಬೆಳವಣಿಗೆಗೆ ಹೊಸ ಉತ್ಸಾಹವನ್ನು ನೀಡಲಿದೆ.

ವರದಿ: ಡಿ.ಪಿ. ಅರವಿಂದ್

Post a Comment

Previous Post Next Post